ಹೊಂಗಿರಣ ಬ್ಲಾಗ್ ಗೆ ತಮಗೆ ಆದರದ ಸುಸ್ವಾಗತ… ನಿಮ್ಮ ಸಲಹೆ ಮಾರ್ಗದರ್ಶನಕ್ಕೆ ಸದಾ ಸ್ವಾಗತ….. ಭೇಟಿ ನೀಡಿದ್ದಕ್ಕೆಧನ್ಯವಾದಗಳು…

ಸೆಪ್ಟೆಂಬರ್ 22, 2020

ಪದಚಿಂತನ

ಸಂವೇದನಾಶೀಲ/ ನಿರೂಪಣೆ

ಅರಿವಿನ ನಡೆ, ವಿವರಿಸುವುದು ಎಂಬರ್ಥಗಳು ಕ್ರಮವಾಗಿ ಈ ಪದಗಳಿಗಿವೆ.

ವಿದ್ ಧಾತು ಜ್ಞಾನ ಎಂಬರ್ಥ ಹೊಂದಿದ್ದು, ಅ+ ನಾ ಪ್ರತ್ಯಯ ಮತ್ತು ಸಂ ಉಪಸರ್ಗ ಸೇರಿ ಸಂವೇದನಾ ಪದವು ನಿಷ್ಪತ್ತಿಯಾಗಿ,

ಅರಿವು, ಅನುಭವ ಮುಂತಾದ ಅರ್ಥಗಳು ಸ್ಫುರಿಸುತ್ತವೆ.

ಶೀಲ್ ಧಾತು ಗುಣ ಎಂಬರ್ಥವಿದ್ದು ಅ ಪ್ರತ್ಯಯ ಸೇರಿ ಶೀಲ ಎಂದಾಗಿ,

ಸ್ವಭಾವ, ಸತ್ತ್ವ, ನೀತಿ, ಒಳ್ಳೆಯ ನಡತೆ ಮುಂತಾದ ಅರ್ಥಗಳು ಸ್ಫುರಿಸುತ್ತವೆ. ಸಂವೇದನಾಶೀಲ ಸಮಸ್ತ ಪದವು ಜ್ಞಾನದ ನಡೆ, ಅರಿವಿನ ಸ್ವಭಾವ ಮುಂತಾದ ಅರ್ಥಗಳನ್ನು ಹೊಂದಿದೆ.


ರೂಪ ಧಾತು ಆಕಾರ,ಸೌಂದರ್ಯ ಎಂಬ ಅರ್ಥ ಹೊಂದಿದ್ದು, ಣ ಪ್ರತ್ಯಯ ನಿ ಉಪಸರ್ಗ ಸೇರಿ ನಿರೂಪಣ ಪದ ಸಿದ್ಧಿಸಿ, ಗಮನಿಸುವುದು, ವಿಮರ್ಶಿಸುವುದು, ವಿಷಯಸ್ವರೂಪವನ್ನು ವಿವರಿಸುವುದು ಮುಂತಾದ ಅರ್ಥಗಳು ಸ್ಫುರಿಸುತ್ತವೆ. ಕನ್ನಡದಲ್ಲಿ ನಿರೂಪಣೆ ಎಂದಾಗಿದೆ.

ಅ.ನಾ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ