ಹೊಂಗಿರಣ ಬ್ಲಾಗ್ ಗೆ ತಮಗೆ ಆದರದ ಸುಸ್ವಾಗತ… ನಿಮ್ಮ ಸಲಹೆ ಮಾರ್ಗದರ್ಶನಕ್ಕೆ ಸದಾ ಸ್ವಾಗತ….. ಭೇಟಿ ನೀಡಿದ್ದಕ್ಕೆಧನ್ಯವಾದಗಳು…

ಸೆಪ್ಟೆಂಬರ್ 22, 2020

ಕೊಟ್ಟು ಮರೆಯುತ ಸರಿಯೊ

 

ದೇವಂಗೆ ಹೂವಿತ್ತು

ಮೌನತಳೆವುದು ಬಳ್ಳಿ !

ಕುಕಿಲ ಸಂತಸಮಿತ್ತು

ಹೋಹುದೈ ಹಾರಿ !

ಅಹಮಿಕೆಯ ತೊರೆದು ತಾ

ಸಾಜದೊಳು ಬಾಳ್ವಂತೆ

ಕೊಟ್ಟು ಮರೆಯುತ ಸರಿಯೊ

ಜಾಣಮೂರ್ಖ//

ಭಕ್ತಿ ಭಂಡಾರಿ ಬಸವಣ್ಣನವರು ತಮ್ಮ ಒಂದು ವಚನದಲ್ಲಿ -"ಮಾಡುವ ಮಾಟದೊಳು ತಾನಿಲ್ಲದಂತಿರಬೇಕು ; ಶಿವನ ನೆನೆಯುತ್ತ ನೆನೆಯುತ್ತ ನೆನೆಯದಂತಿರಬೇಕು" ಎಂದಿದ್ದಾರೆ. ಹಾಗೆಯೇ ಭಗವಂತನ ಅರ್ಚನೆಗೆ ಹೂವನಿತ್ತು ಬಳ್ಳಿ ಮೌನಿಯಾಗುತ್ತದೆ ! ಕೋಗಿಲೆಯು ಮಧುರವಾದ ಕೂಗಿತ್ತು ಪ್ರಪಂಚವನ್ನು ಗಂಧರ್ವ ಲೋಕವನ್ನಾಗಿಸಿ ತಾನೆತ್ತಲೋ ಮೌನವಾಗಿ ಹಾರಿ ಹೋಗುತ್ತದೆ. ಓ ಗೆಳೆಯ ನಾವೂ ಸಹ ಹಾಗೆಯೇ ಇರಬೇಕು. ಸತ್ಕರ್ಮಗಳನ್ನೆಸಗಿ ಮೌನದಿಂದ , ಸಹಜವಾಗಿ ಬದುಕಬೇಕು. ನಾನೆಂಬ ಅಹಂಕಾರವು  ಸುಳಿಯದಂತೆ ಎಚ್ಚರವಹಿಸಬೇಕು. ಎಂತಹಾ ಸುಂದರ ಬದುಕದು ? ಅಲ್ಲವೇ ಗೆಳೆಯರೇ ?

✍️ಮುರಳೀಧರ ಹೆಚ್.ಆರ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ