ಹೊಂಗಿರಣ ಬ್ಲಾಗ್ ಗೆ ತಮಗೆ ಆದರದ ಸುಸ್ವಾಗತ… ನಿಮ್ಮ ಸಲಹೆ ಮಾರ್ಗದರ್ಶನಕ್ಕೆ ಸದಾ ಸ್ವಾಗತ….. ಭೇಟಿ ನೀಡಿದ್ದಕ್ಕೆಧನ್ಯವಾದಗಳು…

ಸೆಪ್ಟೆಂಬರ್ 23, 2020

ಅಧ್ಯಾತ್ಮ ದೀಪ

ಇರುಳ ಕತ್ತಲೆ ಕಳೆಯೆಸ

ಸಣ್ಣ ದೀಪದ ಬೆಳಕು

ಬಾಳ್ಗತ್ತಲೆಯ ಕಳೆಯೆ

ಅರಿವಿನಾ ಬೆಳಕು

ದಾರಿಗಾಣದೆ ಎಡವಿ

ಬೀಳದಲೆ ಕರೆದೊಯ್ವು

ದಧ್ಯಾತ್ಮ ದೀಪ ಕಾಣ್

ಜಾಣಮೂರ್ಖ//

ರಾತ್ರಿಯ ಭೌತಿಕವಾದ ಕತ್ತಲನ್ನು ಕಳೆಯಲು ಸಣ್ಣದೊಂದು ದೀಪದ ಬೆಳಕು ಸಾಕು. ಆದರೆ ಬದುಕಿನ ಅಂಧಕಾರವನ್ನು ಕಳೆಯಲು ಅರಿವಿನ ಬೆಳಕು ಬೆಳಗಬೇಕು ಕಣಯ್ಯ ಗೆಳೆಯ. ಅದು ಬೆಳಗದೇ ಹೋದರೆ ಬಾಳ ಕತ್ತಲೆಯನ್ನು ಎಂತು ಕಳೆಯಲಾದೀತು ? ಜಗದ ಬದುಕಿಗಡರಿದ ಕಾರ್ಗತ್ತಲನ್ನು  ಸೀಳಿ ಮುನ್ನಡೆಸೋ ಬೆಳಕೆಂದರೆ ಅಧ್ಯಾತ್ಮದ ಅರಿವು ! ಅಧ್ಯಾತ್ಮದ ದೀಪ, ಅಧ್ಯಾತ್ಮ ಜ್ಯೋತಿ ! ಆ ಜ್ಯೋತಿ ಬೆಳಗಿದರೆ ಎಡಹುವ , ದಾರಿ ತಪ್ಪುವ  ಮಾತೆಲ್ಲಿಯದು ? ಅಲ್ಲವೇ ಗೆಳೆಯರೇ ?

✍️ಮುರಳೀಧರ ಹೆಚ್.ಆರ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ